ಸಕಲೇಶಪುರದಲ್ಲಿ ?ಪ್ರೇಮ ಚಂದ್ರಮ?
Posted date: 5/July/2010

ಜೇನುಕಲ್ಲು ಚಿತ್ರಾಲಯ ಲಾಂಛನದಲ್ಲಿ ಯು.ಇ.ಗಣೇಶ್, ಜಿ.ಕುಮಾರ್, ಜಿ.ಎಸ್.ಜಗದೀಶ್ ಹಾಗೂ ಸುನೀಲ್‌ಕುಮಾರ್‌ಶಿಂಧೆ ನಿರ್ಮಿಸುತ್ತಿರುವ ‘ಪ್ರೇಮ ಚಂದ್ರಮ ಚಿತ್ರಕ್ಕೆ ಸಕಲೇಶಪುರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
    ನಾಯಕನಿಗೆ ನಾಯಕಿಯ ಮೇಲೆ ಪ್ರೀತಿ ಹುಟ್ಟಿದ ಸಮಯ. ಈ ವಿಷಯವನ್ನು ಆಕೆಗೆ ಬಹಳ ದಿನದಿಂದ ಹೇಳಿಬೇಕೆಂದು ಕೊಂಡಿದ ಆತ ಸೂಕ್ತ ಸಮಯ ನೋಡಿ ವಿಷಯ ಪ್ರಸ್ತಾಪಿಸುತ್ತಾನೆ. ನಾಯಕನ ಮಾತಿನಿಂದ ಕೋಪಗೊಂಡ ನಾಯಕಿ ಕಪಾಳಕ್ಕೆ ಹೊಡೆದು, ವೃತ್ತಿಯಲ್ಲಿ ವೈದ್ಯನಾಗಿರುವ ನೀನು ಕಂಡಕಂಡ ಹೆಣ್ಣುಮಕ್ಕಳಿಗೆ ಈ ರೀತಿ ಹೇಳುವುದು ಸರಿಯಲ್ಲ ಎಂದು ಹೇಳಿ ಹೋಗುತ್ತಾಳೆ. ಈ ಸನ್ನಿವೇಶವನ್ನು ‘ಪ್ರೇಮಚಂದ್ರಮ ಚಿತ್ರಕ್ಕಾಗಿ ನಿರ್ದೇಶಕ ಶಾಹುರಾಜ್ ಶಿಂಧೆ ಇತ್ತೀಚೆಗೆ ಸಕಲೇಶಪುರದಲ್ಲಿ ಚಿತ್ರಿಸಿಕೊಂಡರು. ಕಿರಣ್ ಹಾಗೂ ರೇಖಾ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
    ಸಕಲೇಶಪುರದಲ್ಲಿ ಸುರಿಯುತ್ತಿರುವ ಮಳೆಯಲ್ಲೂ ನಮ್ಮ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಸಾಗಿದೆ ಎಂದು ತಿಳಿಸಿರುವ ನಿರ್ದೇಶಕರು ಕಾಗಿನೆಲೆ ಮುಂತಾದ ಸ್ಥಳಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ ಎನ್ನುತ್ತಾರೆ.
    ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ರವರ ಛಾಯಾಗ್ರಹಣವಿದೆ. ಶಶಿಧರ್‌ಭಟ್(ಶಿರಸಿ) ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿರ್ಮರ ಸಾಹಸವಿರುವ ‘ಪ್ರೇಮ ಚಂದ್ರಮ ಚಿತ್ರದ ತಾರಾಬಳಗದಲ್ಲಿ ರಘುಮುಖರ್ಜಿ, ಕಿರಣ್(ಹಾಗೆ ಸುಮ್ಮನೆ), ರೇಖಾ, ಶ್ರೀನಾಥ್, ಉಮಾಶ್ರೀ, ಸುಮಿತ್ರ, ಯು.ಇ.ಗಣೇಶ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed